Monday, December 8, 2008

ಎಲ್ಲಿರುವೆ? ಮಾನವ ಕಾಡುವ ರೂಪಸಿಯೇ ?

ಮಳೆ ಹನಿಗಳು
ಕೂಗುತಿವೆ ಇಂಪಾದ ದನಿಗಳು
ಅವಳ ತಾಳ್ಮೆಯ ಕಣ್ಣುಗಳು
ಕಾಣಲು ಕಾತುರ.. ಮತ್ತೆ ಮತ್ತೆ ಕಾಡುತಿವೆ
ಅವಳು ನಕ್ಕು ನುಡಿದ
ಒಲುಮೆಯ ಮಾತುಗಳು.

ಏನ್ ರೀ? ಅಂತಿರಾ? ಏನು ಇಲ್ಲ ಸ್ವಾಮಿ,
ಒಂದಷ್ಟು ಹಳೆಯ ನೆನಪುಗಳು ಮಳೆಯ ಹನಿಗಳ ಜೊತೆ
ಹೃದಯದಲ್ಲಿ ತುಂತುರು ನಾದ ಮಾಡಿ ಹೋಗುತ್ತಿವೆ..
ಏನೋ ಬೇಸರ, ಕಾಣಲು ಅವಳ, ಕಾತುರ..
ಅಷ್ಟೆ ..

ಮತ್ತೆ ಬಾಳು ಅವರ ಹಾದು ನೆನಪಿಗೆ ಬರುತ್ತೆ

" ಎಲ್ಲಿರುವೆ? ಮಾನವ ಕಾಡುವ ರೂಪಸಿಯೇ ? .."

Wednesday, August 6, 2008

ಹೀಗಿವೆ ಡುಮ್ಮನ ದಿನಗಳು...

ಮತ್ತೇನ್ ಶಿವಾ ಹೊಸ ಸುದ್ದಿ ಅಂತ ಕೇಳ್ತಿರಾ?

ಏನು ಇಲ್ಲ ಗುರುಗಳೇ.. ಅದೇ ಹಳೆ ಕಥೆ patient ಗೆ ಅದೇ ಹೆಂಡತಿ ಮಾತ್ರ ಕಾಣಿಸುತ್ತಿಲ್ಲ , ಪಕ್ಕದ ಮನೆಅವ್ರ್ಣ ನೋಡಿದ್ರೆ ಕಣ್ಣು ಕೆಂಪಾಗಾತು, ಈರುಳ್ಳಿ ಹೆಚ್ಚಿದರೆ ಕಣ್ಣೀರ್ ಜಾಸ್ತಿ ಬರತ್ತೆ .. ಮಕ್ಕಳ ತಲೆ ನೋವು..ಹುಡುಗಿಗೆ sight ಹೊಡಿಯುವಾಗ ಕಣ್ಣಲ್ಲಿ ಕಲ್ಲು ಬಿತ್ತು..

ಮತ್ತೆ ಅವಾಗ ಅವಾಗ campಗೆ ಹಾಕ್ತಾರೆ.. ಸುಪರಾಗಿರತ್ತೆ.. ಫಿಲ್ಟರ್ ಕಾಫಿ .. ಇಡ್ಲಿ ದೋಸೆ ವಡೆ ಎಲ್ಲ free camp ನಡೆಸೋರ್ ಖರ್ಚು.. ಒಂದ್ ತರ ಮಜಾನೆ ಅ೦ಕೊಳಿ.

ಜಾಸ್ತಿ ಜಾಸ್ತಿ ಕೇಸು ಬರ್ತವೆ.. ಹೊಸ ಹೊಸ ಪಾಠ ಕಲಿತಿವಿ.

ಊಟ, ಪಾಠ, ಬೆಳಗ್ಗೆ ಓಟ ಒಂದ್ ತರಾ ಚನಾಗಿದೆ.
ದಿನಾ ಸಾಯಂಕಾಲ 5-6 ಕ್ಲಾಸ್ ಇರತ್ತೆ ಹೇಳಿದೆಲ್ಲ ತಲೆ ಮೇಲೆ ಹಾರಿ ಹೋಗತ್ತೆ. ರೂಮ್ನಲ್ಲಿ ರಾತ್ರಿ ಪುಸ್ತಕ ತಗೆದು ಓದಿದ್ರೆನೆ ಅರ್ಥ ಆಗೋದು. ಬೆಪ್ಪು ತಕಡಿ ಸಲ್ಪ ಅದಕ್ಕೆ.
ಹಾಸ್ಟಲ್ನಲ್ಲಿ ಹಾಡ ಕೀಳ್ತೀನಿ sunday ನಿದ್ದೆ ಹೊಡಿತೀನಿ.
internet ಇಲ್ಲ ಅನ್ನೋದ್ ಬಿಟ್ರೆ ಬೇರೆ ಎಲ್ಲ ಸೂಪರ್.

ಕೃಷ್ಣ ದಾಸ್ ಅಂತ ಒಬ್ರು ಟೀಚರ್ ಇದಾರೆ . ಬಹಳ ಒಳ್ಳೆಯವರು.. ಯಾವಾಗಲು ನಗ್ತಾರೆ
ಸೂಪರಾಗಿ ಪಾಠ ಮಾಡ್ತಾರೆ. ಇದ್ರೆ ಅವ್ರ ಹಂಗೆ ಇರ್ಬೇಕು ಅನ್ನಿಸುತ್ತೆ ..
ಇವತ್ತು ಸಿಕ್ಕಿದರು ಏನೋ doubt ಕೀಳದೆ ಪಟ ಪಟ ಅಂತ ಉತ್ತರ ಹೇಳಿದ್ರು.
ಅದು ಏನು ತಲೆನೋ info ಮಹಾಸಾಗರನೋ ಅರ್ಥವೇ ಆಗಲ್ಲ.

ಓದಾಕೆ ಹೊತ್ತ ಆಯಿತು ಬರ್ತೀನಿ ..

ಮತ್ತೆ ಸಿಗಣ..

Saturday, May 31, 2008

ಕಾಣದ೦ತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊ೦ಡನೊ...

ಯಾಕ್ರೀ? ಎಲ್ಲಿಗ್ ಹೋದ ಡುಮ್ಮ ಅಂತ ಯೋಚಿಸ್ತಿದಿರಾ?
ಏಪ್ರಿಲ್ 29 ನೆ ತಾರಿಕಿನಿ೦ದ ಮದುರೈನಲ್ಲಿರೋ : ಅರವಿಂದ್ ಕಣ್ಣಿನ ಆಸ್ಪತ್ರೆ ಅಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊ೦ಡಿದಿನಿ.
ಚಿಕ್ಕ ಊರು , ಹೊಸ ಭಾಷೆ, ಅಂತ ಏನು ತಲೆ ಕೆಡಿಸಿಕೊಲ್ಲೋ ಹಾಗೆ ಇಲ್ಲ
hospital ನಲ್ಲಿ ಬೆನ್ನು ಮುರಿಯೋ ಅಷ್ಟು ಕೆಲ್ಸ, ಆನೆ ಭಾರದಷ್ಟು ಓದೋಕೆ ಇದೆ, ಊಟಕ್ಕೆ ಅನ್ನ ಪುಲ್ಚಾರು ಕೆಲಸದ ವೇಳೆ ಬೆಳಗ್ಗೆ 0730 ಇಂದ 1800 ತನಕ. ಅಧ್ಯಾಪಕರು ಚೆನ್ನಾಗಿದಾರೆ ,ಪಾಠ ಸೂಪರಾಗಿ ಮಾಡ್ತಾರೆ. ರೂಮು ನಾಲಕ್ನೆ ಮಹಡಿನಲ್ಲಿದೆ. ಊರೆಲ್ಲ ಕಾಣಿಸುತ್ತೆ.
ಇಲ್ಲೇ ಎಲ್ಲ ಸೌಕರ್ಯಗಲಿದಾವೆ. ಎಲ್ಲ ಓದಿದ್ ಮುಗ್ಸೋ ಅಷ್ಟರಲ್ಲಿ ಇನ್ನು ಆರು ವರ್ಷಗಳಗಬಹುದು.
ಅಲ್ಲಿ ತನಕ ಈ ದುಮ್ಮಾನ blog ಓದಿ enjoy ಮಾಡಿ..........

Tuesday, April 8, 2008

ಕೇಳದೇ ನಿಮಗೀಗ ದೂರದಲ್ಲಿ ಯಾರೋ ?........

ಎಷ್ಟು ಸತಿ ಈ ಹಾಡು ಕೇಳಿದರು ಹೃದಯದಲ್ಲಿ ಏನೋ ಗೊಂದಲ, ಏನೋ ಆಸೆ, ಉಕ್ಕಿ ಹರಿಯುವಂತೆ..
ಜೀವನದಿ ನಡಿಯುತ್ತ ಇಲ್ಲಿಯ ವರೆಗೆ ಸಾಗುತ್ತ ಬಂದಿದೆ ಒಂಟಿ ಸವಾರಿ. ಹೇಳಬೇಕಂದರೆ ನೂರು ನೂರು ಸಂಷಯಗಳು. ಈ ಸುಂದರ ಮೈತ್ರಿಯ ಕಳೆದುಕೊಳ್ಳುವ ಹೆದರಿಕೆ. ಸಮಯ ಸಂಧರ್ಬ ದ ಸುಳಿಯಲ್ಲಿ ಸಿಲುಕಿ ಒಂದು ಪುಟ್ಟ ಮಲ್ಲಿಗೆ ಹೂವು ಬಾಡುವಂತಿದೆ.

ಹೃದಯದಲ್ಲಿ ಒಂದು ಹಾಡು ಮೂಡಿ.
ನಿನ್ನ ಕರವ ಪಿಡಿಯಲು ಬೇಡಿ.

ಕೇಳಲು ಹೆದರುವೇನು ನಿನ್ನನ್ನು
ಮಲ್ಲಿಗೆಯೇ,
ನೋಡು ನಿನ್ನ ಮೈತ್ರಿಯ ಮೋಡಿ .

ಹೇಗೆ ಹೇಳಲಿ ಮನಸ ಮಾತನ್ನು ?
ಪದ್ಯ-ಗದ್ಯಗಲೆಲ್ಲವು ಸುಳ್ಳೇ ಸರಿ
ಕೇಳುವೆಯಾ ಕಿವಿಗೊಟ್ಟು
ಹೃದಯ ಮೀಟುವ ಈ ಪರಿ?


ಮತ್ತೆ ಬಾ ಕನಸಲ್ಲಿ ಇಂದು
ತಾರೆ ಕಾಣಲು ಕಾತುರ, ನಿನ್ನ
ಬೆಳದಿಂಗಳಲಿ ಬಾ ಮಿಂದು,
ಕಾದಿರುವೆ ನಿನಗೊಸ್ಕರ ಪೂರ್ಣಿಮೆಯಂದು...........