Saturday, May 31, 2008

ಕಾಣದ೦ತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊ೦ಡನೊ...

ಯಾಕ್ರೀ? ಎಲ್ಲಿಗ್ ಹೋದ ಡುಮ್ಮ ಅಂತ ಯೋಚಿಸ್ತಿದಿರಾ?
ಏಪ್ರಿಲ್ 29 ನೆ ತಾರಿಕಿನಿ೦ದ ಮದುರೈನಲ್ಲಿರೋ : ಅರವಿಂದ್ ಕಣ್ಣಿನ ಆಸ್ಪತ್ರೆ ಅಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊ೦ಡಿದಿನಿ.
ಚಿಕ್ಕ ಊರು , ಹೊಸ ಭಾಷೆ, ಅಂತ ಏನು ತಲೆ ಕೆಡಿಸಿಕೊಲ್ಲೋ ಹಾಗೆ ಇಲ್ಲ
hospital ನಲ್ಲಿ ಬೆನ್ನು ಮುರಿಯೋ ಅಷ್ಟು ಕೆಲ್ಸ, ಆನೆ ಭಾರದಷ್ಟು ಓದೋಕೆ ಇದೆ, ಊಟಕ್ಕೆ ಅನ್ನ ಪುಲ್ಚಾರು ಕೆಲಸದ ವೇಳೆ ಬೆಳಗ್ಗೆ 0730 ಇಂದ 1800 ತನಕ. ಅಧ್ಯಾಪಕರು ಚೆನ್ನಾಗಿದಾರೆ ,ಪಾಠ ಸೂಪರಾಗಿ ಮಾಡ್ತಾರೆ. ರೂಮು ನಾಲಕ್ನೆ ಮಹಡಿನಲ್ಲಿದೆ. ಊರೆಲ್ಲ ಕಾಣಿಸುತ್ತೆ.
ಇಲ್ಲೇ ಎಲ್ಲ ಸೌಕರ್ಯಗಲಿದಾವೆ. ಎಲ್ಲ ಓದಿದ್ ಮುಗ್ಸೋ ಅಷ್ಟರಲ್ಲಿ ಇನ್ನು ಆರು ವರ್ಷಗಳಗಬಹುದು.
ಅಲ್ಲಿ ತನಕ ಈ ದುಮ್ಮಾನ blog ಓದಿ enjoy ಮಾಡಿ..........